ರಾಹುಲ್ ಗಾಂಧಿ ಜನ್ಮದಿನ ಹಿನ್ನಲೆ ಯೂಥ್ ಕಾಂಗ್ರೇಸ್‌ನಿಂದ ನಿರ್ಗತಿಕರಿಗೆ ಕೂಲರ್ ವಿತರಣೆ

ರಾಹುಲ್ ಗಾಂಧಿ ಜನ್ಮದಿನ ಹಿನ್ನಲೆ ಯೂಥ್ ಕಾಂಗ್ರೇಸ್‌ನಿಂದ ನಿರ್ಗತಿಕರಿಗೆ ಕೂಲರ್ ವಿತರಣೆ

ನವದೆಹಲಿ : ದ್ವೇಷದ ರಾಜಕಾರಣದ ವಿರುದ್ಧ ಇಡೀ ದೇಶವನ್ನು ಒಗ್ಗೂಡಿಸಿ ಏಕತೆ ಮತ್ತು ಪ್ರೀತಿಯ ಸಂದೇಶವನ್ನು ನೀಡಿದ, ಸಂವಿಧಾನ ಬದಲಿಸುವ ಕನಸು ಕಂಡವರನ್ನು ಮಂಡಿಯೂರುವಂತೆ ಮಾಡಿದ ನಾಯಕ ರಾಹುಲ್ ಗಾಂಧಿ ಎಂದು ಯೂಥ್ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಶ್ಲಾಘಿಸಿದ್ದಾರೆ.

ರಾಹುಲ್ ಗಾಂಧಿ ಜನ್ಮದ ಅಂಗವಾಗಿ ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ಬಡವರಿಗೆ ಅಗತ್ಯ ಗೃಹೋಪಯೋಗಿ ವಸ್ತುಗಳು ಮತ್ತು ಸಂವಿಧಾನದ ಪ್ರತಿಗಳನ್ನು ವಿತರಿಸಲಾಯಿತು. ಬಳಿಕ ಮಾತನಾಡಿದ ಶ್ರೀನಿವಾಸ್ ರಾಹುಲ್ ಗಾಂಧಿಯವರ ಜನ್ಮದಿನದಂದು ದೆಹಲಿಯಲ್ಲಿ ತೀವ್ರ ಬಿಸಿ ಮತ್ತು ಬಿಸಿಲಿನ ಅಲೆಯನ್ನು ಗಮನದಲ್ಲಿಟ್ಟುಕೊಂಡು ನಗರದ ಆಶ್ರಯ ಮನೆಗಳಿಗೆ ಏರ್ ಕೂಲರ್‌ಗಳನ್ನು ವಿತರಿಸಲಾಯಿತು. ಇದರೊಂದಿಗೆ ನಾವು ಸಂವಿಧಾನದ ಪ್ರತಿಗಳನ್ನು ಜನರಿಗೆ ವಿತರಿಸಿದ್ದೇವೆ ಮತ್ತು ದೆಹಲಿಯ ಹಲವು ಜಿಲ್ಲೆಗಳಲ್ಲಿ ಕುಡಿಯುವ ತಣ್ಣೀರು ಸೇವೆಯನ್ನು ಸಹ ಆಯೋಜಿಸಿದ್ದೇವೆ.

ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಇಡೀ ದೇಶವನ್ನು ಪಾದಾಯಾತ್ರೆಯ ಮೂಲಕ ನಡೆದು ನ್ಯಾಯ, ಏಕತೆ ಮತ್ತು ಪ್ರೀತಿಯ ಸಂದೇಶವನ್ನು ಸಾರಿದ್ದಾರೆ. ದ್ವೇಷದ ರಾಜಕಾರಣದ ಮೂಲಕ ಸಂವಿಧಾನ ಬದಲಿಸುವ ಕನಸು ಕಂಡವರನ್ನು ಮಂಡಿಯೂರುವಂತೆ ಮಾಡಿದ ನಾಯಕ ರಾಹುಲ್ ಗಾಂಧಿ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಘಟನೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಕೊಕೊ ಪಾಡಿ ಮಾತನಾಡಿ, ನಮ್ಮ ಜನನಾಯಕರಾದ ರಾಹುಲ್ ಗಾಂಧಿಯವರ ಜನ್ಮದಿನದಂದು ರಕ್ತದಾನ ಶಿಬಿರಗಳು, ಗಿಡ ನೆಡುವ ಕಾರ್ಯಕ್ರಮಗಳು, ಮುಂತಾದ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದಾದ್ಯಂತ ಯುವ ಕಾಂಗ್ರೆಸ್‌ನ ಎಲ್ಲಾ ರಾಜ್ಯ ಘಟಕಗಳಿಂದ ಆಯೋಜಿಸಲಾಗಿದೆ ಎಂದರು. ಈ ವೇಳೆ ಯುವ ಕಾಂಗ್ರೆಸ್‌ನ ಅನೇಕ ರಾಷ್ಟ್ರೀಯ ಕಾರ್ಯಕಾರಿಣಿ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರುಗಳು ಮತ್ತು ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Previous Post
100 ಕೋಟಿ ಕಿಕ್‌ಬ್ಯಾಕ್‌ಗೆ ಬೇಡಿಕೆ ಇಟ್ಟಿದ್ದಕ್ಕೆ ಸಾಕ್ಷಿ ಇದೆ ವಿಚಾರಣೆ ವೇಳೆ ಇಡಿ ಪರ ವಕೀಲರ ಹೇಳಿಕೆ | ಕೇಜ್ರಿವಾಲ್ ನ್ಯಾಯಂಗ ಬಂಧನ ವಿಸ್ತರಣೆ
Next Post
ಸ್ಪೀಕರ್ ಆಯ್ಕೆ ಕಸರತ್ತು, ಮೋದಿ ನಿರ್ಧಾರಕ್ಕೆ ಎನ್‌ಡಿಎ ನಾಯಕರ ಬೆಂಬಲ?

Recent News