ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ 11 ಬಗೆಯ 201 ಕೆಜಿ ಲಡ್ಡು ತಯಾರಿ
ಛತ್ತೀಸ್ಗಢ ಜೂನ್ 4: ಲೋಕಸಭೆ ಚುನಾವಣೆ ಫಲಿತಾಂಶ ಚುನಾವಣಾ ಮತ ಎಣಿಕೆ ಮಧ್ಯೆ ಬಿಜೆಪಿ ಕಚೇರಿಯೊಳಗೆ ಪುರಿ, ಸಿಹಿ ತಿಂಡಿ ಮಾಡಲಾಗುತ್ತಿದೆ. ಇತ್ತ ಛತ್ತೀಸ್ಗಢದ ಬಿಜೆಪಿ ಕಚೇರಿಯಲ್ಲೂ ವಿಶೇಷ ಸಿದ್ಧತೆ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ವಿಜಯೋತ್ಸವ ಆಚರಿಸಲು ರಾಯಪುರ ಬಿಜೆಪಿ 11 ಬಗೆಯ 201 ಕೆಜಿ ಲಡ್ಡುಗಳನ್ನು ವಿತರಿಸಲಿದೆ. ಮತ ಎಣಿಕೆಗೂ ಮುನ್ನವೇ ದೆಹಲಿಯ ಬಿಜೆಪಿ ಕಚೇರಿಗೆ ನಾಯಕರು ಬರಲಾರಂಭಿಸಿದ್ದಾರೆ. ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಜೆಪಿಯ ಆತ್ಮಸ್ಥೈರ್ಯವನ್ನು ಹೆಚ್ಚಿಸಿವೆ. ಹೀಗಾಗಿ ಇಂದಿನ ಫಲಿತಾಂಶ ಭಾರೀ ಕುತೂಹಲ ಮೂಡಿದೆ. ಇದರಿಂದಾಗಿ ಮತ ಎಣಿಕೆಗೂ ಮುನ್ನವೇ ದೆಹಲಿಯ ಬಿಜೆಪಿ ಕಚೇರಿಯಲ್ಲಿ ನಾಯಕರು ಜಮಾಯಿಸಲಾರಂಭಿಸಿದ್ದಾರೆ. ಕಚೇರಿಯೊಳಗೆ ನಾನಾ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತಿದೆ.