ನಿರುದ್ಯೋಗ, ದೇಶದ ಭದ್ರತೆ, ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿಯನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆ ತೆಗೆದುಕೊಂಡಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್, ದೇಶದಲ್ಲಿ ಎರಡು ಭಾರತಗಳು ಸೃಷ್ಟಿಯಾಗಿವೆ. ಒಂದು ಅತ್ಯಂತ ಸಿರಿವಂತರ ಭಾರತವಾದ್ರೆ ಮತ್ತೊಂದು ಬಡವರ ಭಾರತ. ಶ್ರೀಮಂತರು ಹಾಗೂ ಬಡವರ ನಡುವಿನ ಕಂದಕ ಜಾಸ್ತಿಯಾಗ್ತಿದೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.