ರಾಹುಲ್ ನಿಮ್ಮವ ಎಂದು ಪರಿಗಣಿಸಿ ಅವನು ನಿರಾಶೆಗೊಳಿಸುವುದಿಲ್ಲ – ಸೋನಿಯಗಾಂಧಿ
ನವದೆಹಲಿ : ರಾಯ್ ಬರೇಲಿ ನನ್ನ ಕುಟುಂಬ, ಅಮೇಥಿ ಕೂಡ ನನ್ನ ಮನೆ ಇಲ್ಲಿ ನನ್ನ ಜೀವನದ ಸವಿ ನೆನಪುಗಳಿದೆ, ನಮ್ಮ ಕುಟುಂಬದ ಬೇರುಗಳು ಕಳೆದ 100 ವರ್ಷಗಳಿಂದ ಈ ಮಣ್ಣಿನೊಂದಿಗೆ ಸಂಬಂಧ ಬೆಸೆದುಕೊಂಡಿವೆ. ಗಂಗಾಮಾತೆಯಂತ ಪವಿತ್ರವಾದ ಈ ಸಂಬಂಧವು ಅವಧ್ ಮತ್ತು ರಾಯ್ ಬರೇಲಿಯ ರೈತರ ಚಳವಳಿಯಿಂದ ಪ್ರಾರಂಭವಾಯಿತು ಮತ್ತು ಇಂದಿಗೂ ಮುಂದುವರೆದಿದೆ ಎಂದು ಸೋನಿಯಗಾಂಧಿ ಹೇಳಿದ್ದಾರೆ
ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಪರ ಮತಯಾಚಿಸಲು ಸಾರ್ವಜನಿಕ ಸಭೆ ಉದ್ದೇಶಿಸಿದ ಮಾತನಾಡಿದ ಅವರು ರಾಯ್ ಬರೇಲಿ ಜೊತೆಗಿನ ನೆನಪುಗಳನ್ನು ಹಂಚಿಕೊಂಡರು. ಇಂದಿರಾ ಗಾಂಧಿ ಅವರ ಹೃದಯದಲ್ಲಿ ರಾಯ್ ಬರೇಲಿಗೆ ವಿಶೇಷ ಸ್ಥಾನವಿತ್ತು. ಅವರು ಹತ್ತಿರದಿಂದ ಕೆಲಸ ಮಾಡುವುದನ್ನು ನಾನು ನೋಡಿದ್ದೇನೆ.
ಇಂದಿರಾ ಗಾಂಧಿ ಮತ್ತು ರಾಯ್ ಬರೇಲಿಯ ಜನರು ನನಗೆ ನೀಡಿದ ಶಿಕ್ಷಣವನ್ನೇ ನಾನು ರಾಹುಲ್ ಮತ್ತು ಪ್ರಿಯಾಂಕಾ ಅವರಿಗೆ ನೀಡಿದ್ದೇನೆ, ಪ್ರತಿಯೊಬ್ಬರನ್ನು ಗೌರವಿಸಿ, ದುರ್ಬಲರನ್ನು ರಕ್ಷಿಸಿ, ಅನ್ಯಾಯದ ವಿರುದ್ಧ ಹೋರಾಡಿ ಮತ್ತು ಜನರ ಹಕ್ಕುಗಳಿಗಾಗಿ, ನೀವು ಏನು ಹೋರಾಡಬೇಕು. ಭಯಪಡಬೇಡಿ, ಏಕೆಂದರೆ ನಿಮ್ಮ ಹೋರಾಟದ ಬೇರುಗಳು ಮತ್ತು ಸಂಪ್ರದಾಯಗಳು ತುಂಬಾ ಪ್ರಬಲವಾಗಿವೆ ಎಂದು ಹೇಳಿಕೊಟ್ಟಿದ್ದೇನೆ
ಜೀವನದುದ್ದಕ್ಕೂ ನಿಮ್ಮ ಆಶೀರ್ವಾದ ಮತ್ತು ಪ್ರೀತಿ ನನ್ನ ಮಡಿಲು ತುಂಬಿದೆ. ನಿಮ್ಮ ಪ್ರೀತಿಯು ನನ್ನನ್ನು ಒಂಟಿಯಾಗಲು ಬಿಡಲಿಲ್ಲ. ನನ್ನದೆಲ್ಲವೂ ನೀವೂ ಕೊಟ್ಟದ್ದು ಆದ್ದರಿಂದ ನಾನು ನನ್ನ ಮಗನನ್ನು ನಿಮಗೆ ಒಪ್ಪಿಸುತ್ತಿದ್ದೇನೆ ನೀವು ನನ್ನನ್ನು ಹೇಗೆ ನಿಮ್ಮವಳು ಎಂದು ಪರಿಗಣಿಸಿದ್ದೀರೋ, ಅದೇ ರೀತಿ ನೀವು ರಾಹುಲ್ರನ್ನು ನಿಮ್ಮವ ಎಂದು ಪರಿಗಣಿಸಬೇಕು. ಈ ರಾಹುಲ್ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದು ಹೇಳಿದರು.
ರಾಯ್ ಬರೇಲಿಯಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಾಹುಲ್ ಗಾಂಧಿ, ಎಐಸಿಸಿ ಪ್ರದಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ಎಸ್ಪಿ ಮುಖ್ಯಸ್ಥ ಮಾಜಿ ಸಿಎಂ ಅಖಿಲೇಶ್ ಯಾದವ್ ಉಪಸ್ಥಿತರಿದ್ದರು.