ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ ಕೋರ್ಟ್‌ನಲ್ಲಿ ಕಣ್ಣಿರಿಟ್ಟ ಸ್ವಾತಿ ಮಲಿವಾಲ

ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ ಕೋರ್ಟ್‌ನಲ್ಲಿ ಕಣ್ಣಿರಿಟ್ಟ ಸ್ವಾತಿ ಮಲಿವಾಲ

ನವದೆಹಲಿ : ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ ಮೇಲಿನ ದೌರ್ಜನ್ಯ ಪ್ರಕರಣದಲ್ಲ ಬಂದನಕೊಳ್ಳಪಟ್ಟಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಗೆ ಜಾಮೀನು ನೀಡಲು ತೀಸ್ ಹಜಾರಿ ಕೋರ್ಟ್ ನಿರಾಕರಿಸಿದೆ. ಎರಡೂ ಕಡೆಯ ವಾದ ಆಲಿಸಿದ ಬಳಿಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರು ಬಿಭವ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಬಿಭವ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್ ಹರಿಹರನ್, ಸಂಸದೆ ಸ್ವಾತಿ ಮಲಿವಾಲ್ ಸಮಯ ಪಡೆಯದೇ ಕೇಜ್ರಿವಾಲ್ ಅವರ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ, ಈ ವೇಳೆ ಬಿಭವ್ ಕುಮಾರ್ ಸಿಎಂ ಮನೆಯೊಳಗೆ ಇರಲಿಲ್ಲ. ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಯಾರಾದಾರೂ ಹೀಗೆ ಪ್ರವೇಶಿಸದಬಹುದೇ?

ಭೇಟ ಸಮಯ ನಿಗಧಿಯಾಗದ ಹಿನ್ನಲೆ ಅವರನ್ನು ಭದ್ರತಾ ಸಿಬ್ಬಂದಿ ತಡೆದರು, ಕಾಯುವ ಕೊಠಡಿಯಲ್ಲಿ ಕೂರಿಸಲು ಮುಂದಾದರು ಬಳಿಕ ಬಿಭವ್ ಕುಮಾರ್ ಅವರೊಂದಿಗೆ ಮಾತನಾಡಲು ಸೆಕ್ಯುರಿಟಿಯನ್ನು ಹೇಳಿದರು ಎಂದು ರಕ್ಷಣಾ ವಕೀಲರು ಹೇಳಿದರು. ಅವರು ಮೇಲೆ ಹಲ್ಲೆಯಾಗಿದೆ ಎನ್ನಲಾಗುತ್ತಿದೆ ಆದರೆ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಘಟನೆ ನಡೆದ ಸ್ಥಳವನ್ನು ಒಮ್ಮೆ ನೋಡಿ, ಇಂತಹ ಘಟನೆ ಅಲ್ಲಿ ಹೇಗೆ ನಡೆಯುತ್ತದೆ? ದೇಹದ ಪ್ರಮುಖ ಭಾಗದಲ್ಲಿ ಯಾವುದೇ ಘೋರವಾದ ಗಾಯವಿಲ್ಲ, ಗಾಯಗಳು ಸ್ವಯಂ ಪ್ರೇರಿತವಾಗಬಹುದು ಎಂದು ಅವರು ಹೇಳಿದರು. ಮಲಿವಾಲ್ ಮಾಡಿದ ಎಲ್ಲಾ ಆರೋಪಗಳು “ಲಪೂರ್ವ ಯೋಜಿತ ಮತ್ತು ಅವಳ ಕಥೆಗೆ ಸರಿಹೊಂದುವಂತೆ ಟೈಲರ್-ಮೇಡ್ವ ಎಂದು ಹೇಳಿದರು. ಈ ಸಂಪೂರ್ಣ ಎಫ್‌ಐಆರ್ ನಂತರದ ಚಿಂತನೆಯ ಫಲಿತಾಂಶವಾಗಿದೆ ನಾನು ಜಾಮೀನು ಮಾತ್ರ ಬಯಸುತ್ತಿದ್ದೇನೆ, ಖುಲಾಸೆಗೊಳಿಸುವುದಲ್ಲ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಬಳಿಕ ಸ್ವಾತಿ ಮಲಿವಾಲ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಆರೋಪಿ ಪ್ರಭಾವಿಯಾಗಿದ್ದು ಸಾಕ್ಷಿಗಳ ಮೇಲೆ ಮತ್ತು ಪ್ರಕರಣದ ಮೇಲೆ ಪರಿಣಾಮ ಬೀರಬಹುದು ತನಿಖೆ ನಡೆಯುತ್ತಿರುವ ಹೊತ್ತಲ್ಲಿ ಪ್ರಭಾವಿ ಸ್ಥಾನದಲ್ಲಿರುವ ಆರೋಪಿ ತನಿಖೆಯ ದಿಕ್ಕು ತಪ್ಪಿಸಬಹುದು ಎಂದು ಹೇಳಿದರು. ವಾದ ಆಲಿಸಿದ ಬಳಿಕ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿತು. ಈ ಹಿನ್ನಲೆ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ವಿಚಾರಣೆ ವೇಳೆ ಕೋರ್ಟ್ ನಲ್ಲಿದ್ದ ಸಂತ್ರಸ್ಥೆ ಸ್ವಾತಿ ಮಲಿವಾಲ ಕಣ್ಣಿರಿಟ್ಟಿದ್ದಾರೆ. ತಾವು ಮಾಡಿದ ಆರೋಪಗಳು ಸುಳ್ಳು, ರಾಜಕೀಯ ಕಾರಣಗಳಿಂದ ಇಂತಹ ಆರೋಪಗಳನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿತ್ತಿದೆ ಎಂದು ಬಿಭವ್ ಕುಮಾರ್ ಪರ ವಕೀಲರು ವಾದ ಮಂಡಿಸುವ ವೇಳೆ ಅವರು ಭಾವುಕರಾಗಿ ಅವರು ನಿಶಕ್ತ್ಯಗೊಂಡರು.

Previous Post
ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಚಾರವಲ್ಲ, ಬಿ.ಝಡ್.ಜಮೀರ್ ಅಹಮದ್ ಖಾನ್ ರಿಲೀಫ್ ನೀಡಿದ ಸುಪ್ರೀಂ
Next Post
ಜವಾಹರಲಾಲ್ ನೆಹರು 60 ನೇ ಪುಣ್ಯತಿಥಿ ಮೋದಿ, ಖರ್ಗೆ ಸೇರಿ ಗಣ್ಯರಿಂದ ನಮನ

Recent News