1985ರಲ್ಲಿ ನಾನು ಸ್ಪರ್ಧಿಸಿದ್ದರೆ 1989ರಲ್ಲಿ ನೀವು ಶಾಸಕರೇ ಆಗುತ್ತಿರಲಿಲ್ಲ ಡಿಕೆಶಿಗೆ ಹೆಚ್.ಡಿಕೆ ತಿರುಗೇಟು
ನವದೆಹಲಿ : ನಾನು ರಾಜಕಾರಣಕ್ಕೆ ಬಂದದ್ದು ತಡವಾಗಿದೆ ನಿಜ, 1985ರ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದರೆ 1989ರಲ್ಲಿ ನೀವು ಶಾಸಕರೇ ಆಗುತ್ತಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಡಿ.ಕೆ ಶಿವಕುಮಾರ್ ಚನ್ನಪಟ್ಟಣ ಪ್ರವಾಸ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಕ್ಷೇತ್ರಕ್ಕೆ ಡಿಸಿಎಂ ಹೋಗಿದ್ದಾರೆ ಜನರ ಕುಂದುಕೊರತೆ ಕೇಳಿದ್ದಕ್ಕೆ ಆಭಾರಿಯಾಗಿದ್ದೇನೆ. ಅಲ್ಲಿ ನಾನು ಕುಮಾರಸ್ವಾಮಿಕ್ಕಿಂತ ಸೀನಿಯರ್ ಅಂತಾ ಹೇಳಿದ್ದಾರೆ ಚನ್ನಪಟ್ಟಣಕ್ಕೂ ನನಗೂ ಸಂಬಂಧ ಈಗ ಪ್ರಾರಂಭವಾಗಿಲ್ಲ, 1985 ರ ದೇವೇಗೌಡರ ಚುನಾವಣಾ ಉಸ್ತುವಾರಿ ನಾನು ವಹಿಸಿದ್ದೆ, ಸಾತನೂರನ್ನು ದೇವೇಗೌಡರು ತೆರವುಗೊಳಿಸಿದರು 1985ರ ಉಪಚುನಾವಣೆಯಲ್ಲಿ ನನಗೆ ಸ್ಪರ್ಧೆ ಮಾಡುವ ಒತ್ತಡ ಬಂತು ನಾನೇ ಸ್ಪರ್ಧೆ ಮಾಡಿದ್ದರೆ ಆವತ್ತೆ ನಾನು ಶಾಸಕನಾಗುತ್ತಿದೆ 1989ರಲ್ಲಿ ನೀವು ಎಂಎಲ್ ಎ ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು