ಅಸ್ಸಾಂ ಮಣಿಪುರಕ್ಕೆ ಭೇಟಿ – ಜನರ ಆಹ್ವಾಲು ಆಲಿಸಿದ ರಾಹುಲ್ ಗಾಂಧಿ

ಅಸ್ಸಾಂ ಮಣಿಪುರಕ್ಕೆ ಭೇಟಿ – ಜನರ ಆಹ್ವಾಲು ಆಲಿಸಿದ ರಾಹುಲ್ ಗಾಂಧಿ

ನವದೆಹಲಿ : ಲೋಕಸಭೆ ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಈಶಾನ್ಯ ರಾಜ್ಯಗಳ ಪ್ರವಾಸ ಆರಂಭಿಸಿದ್ದಾರೆ‌. ಅಸ್ಸಾಂ ಮತ್ತು ಮಣಿಪುರಕ್ಕೆ ಭೇಟಿ ನೀಡಿದ ಅವರು ಪ್ರವಾಹದಲ್ಲಿ ಸಿಲುಕಿರುವ ಜನರು ಮತ್ತು ಕೋಮು ಗಲಭೆಯಲ್ಲಿ ಸಂತ್ರಸ್ಥರಾದ ಜನರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ರಾಹುಲ್ ಗಾಂಧಿ ಮೊದಲು ಅಸ್ಸಾಂನ ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು, ಅಲ್ಲಿ ಅವರನ್ನು ಅಸ್ಸಾಂ ಮತ್ತು ಮಣಿಪುರದ ಕಾಂಗ್ರೆಸ್ ನಾಯಕರು ಅಭಿನಂದಿಸಿದರು. ಅಲ್ಲಿಂದ ಫುಲೆರ್ಟಲ್‌ಗೆ ತೆರಳಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದರು.

ಬಳಿಕ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಹಾನಿಗೊಳಗಾದ ಸ್ಥಳಗಳಲ್ಲಿ ಒಂದಾದ ಚುರಚಂದಪುರಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು. ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಬೆರೆತ ಅವರು ಅವರಿಂದ ಆಹ್ವಾಲುಗಳನ್ನು ಸ್ವೀಕರಿಸಿದರು. ಇದೇ ವೇಳೆ ಅಸ್ಸಾಂ ಪ್ರವಾಹದ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಸುವಂತೆ ಕಾಂಗ್ರೇಸ್ ನಾಯಕರು ಮನವಿ ಮಾಡಿದರು.

ಈ ನಡುವೆ ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಬಿಜೆಪಿ ಕಾಂಗ್ರೇಸ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿವೆ. ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೇಸ್ ನಾಯಕ ಜೈರಾಮ್ ರಮೇಶ್, ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡುವ ಸಮಯದಲ್ಲಿ ಜೈವಿಕ ಪ್ರಧಾನಿ ಮಾಸ್ಕೊಗೆ ತೆರಳುತ್ತಿದ್ದಾರೆ. ಮಣಿಪುರಕ್ಕೆ ರಾಹುಲ್ ಗಾಂಧಿಯವರ ಮೂರನೇ ಭೇಟಿ ಇದಾಗಿದೆ.

ಮಣಿಪುರಕ್ಕೆ ಭೇಟಿ ನೀಡಲು ಜೈವಿಕವಲ್ಲದ ಪ್ರಧಾನಮಂತ್ರಿಗೆ ಸಮಯ ಸಿಕ್ಕಿಲ್ಲ ಅಥವಾ ಒಲವು ತೋರಲಿಲ್ಲ. 2023 ರಲ್ಲಿ ಅವರು ಅವರೇ ಪಕ್ಷದವರು ಆದ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ. ಇದರ ಜೊತೆಗೆ ರಾಜ್ಯದ ಇತರ ರಾಜಕೀಯ ನಾಯಕರನ್ನು, ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿಲ್ಲ ಎಂದು ಕಿಡಿಕಾರಿದರು.

ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಐಟಿ ಸೆಲ್ ಅಧ್ಯಕ್ಷ ಅಮಿತ್ ಮಾಳವೀಯ, ರಾಹುಲ್ ಗಾಂಧಿ ಅನಾರೋಗ್ಯದ ದುರಂತ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಮಣಿಪುರದಲ್ಲಿ ಜನಾಂಗೀಯ ಸಂಘರ್ಷವು ಕಾಂಗ್ರೆಸ್ ಪಕ್ಷದ ಪರಂಪರೆಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯವು ದಶಕಗಳಿಂದ ನಾಗರಿಕರು, ಪೊಲೀಸರು ಮತ್ತು ಸೇನಾ ಸಿಬ್ಬಂದಿಗಳ ಹತ್ಯೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

Previous Post
‘NEET-UG 2024 ಪ್ರಶ್ನೆ ಪತ್ರಿಕೆ ಸೋರಿಕೆ ಒಪ್ಪಿಕೊಂಡ ಸತ್ಯ’ ಪರೀಕ್ಷಾ ಅಕ್ರಮದ ಮಾಹಿತಿ ಕೋರಿದ ಸುಪ್ರೀಂಕೋರ್ಟ್
Next Post
ಕಾನೂನು ತಂಡದೊಂದಿಗೆ ಚರ್ಚಿಸಲು ಹೆಚ್ಚುವರಿ ಸಮಯ ಕೇಳಿದ ಅರವಿಂದ್ ಕೇಜ್ರಿವಾಲ್

Recent News