ಸಕ್ಕರೆ ಅಂಶ ಹೆಚ್ಚಿಸಿಕೊಳ್ಳಲು ಮಾವು ಸೇವನೆ – ಇಡಿ ಆರೋಪಕ್ಕೆ ತಿರುಗೇಟು ನೀಡಿದ ಕೇಜ್ರಿವಾಲ್

ಸಕ್ಕರೆ ಅಂಶ ಹೆಚ್ಚಿಸಿಕೊಳ್ಳಲು ಮಾವು ಸೇವನೆ – ಇಡಿ ಆರೋಪಕ್ಕೆ ತಿರುಗೇಟು ನೀಡಿದ ಕೇಜ್ರಿವಾಲ್

ನವದೆಹಲಿ : ಜಾಮೀನು ಪಡೆಯಲು ಉದ್ದೇಶ ಪೂರ್ವಕವಾಗಿ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳುತ್ತಿದ್ದಾರೆ ಎನ್ನುವ ಇಡಿ ಆರೋಪಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪರ ವಕೀಲರು ತಿರುಗೇಟು ನೀಡಿದ್ದಾರೆ. ಮಾಧ್ಯಮಗಳಿಗೆ ಸುದ್ದಿಯಾಗಲು ಇಡಿ ಕೇಜ್ರಿವಾಲ್ ಮೇಲೆ ಈ ರೀತಿಯ ಕ್ಷುಲಕ ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ‌.

ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆ ಇನ್ಸುಲಿನ್ ಪಡೆಯಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಇಡಿ ಆರೋಪಗಳಗೆ ಕೇಜ್ರಿವಾಲ್ ಪರ ವಕೀಲರು ಉತ್ತರಿಸಿದರು. ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ ಆದರೆ ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಮಾವಿನಹಣ್ಣಿತ್ತು ಎಂದು ಹೇಳಿದ್ದಾರೆ‌.

ಸಕ್ಕರೆ ರಹಿತ ಚಹಾ ಸೇವಿಸುತ್ತೇನೆ ಮತ್ತು ಬಿಳಿ ಅನ್ನದ ಬದಲು ಕಂದು ಬಣ್ಣದ ಅನ್ನವನ್ನು ಸೇವಿಸುತ್ತಿದ್ದಾರೆ ಈ ಎಲ್ಲವನ್ನು ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾಡುತ್ತಿದ್ದಾರೆ ಅದಾಗ್ಯೂ ಮಾಧ್ಯಮಗಳ ಗಮನ ಸೆಳೆಯಲು ಕ್ಷುಲಕ ಆರೋಪ ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಪರ ವಕೀಲರು ವಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಡಿ ಪರ ವಕೀಲರು ವೈದ್ಯರು ಸೂಚಿಸುವ ಡಯೇಟ್ ಗೂ ಕೇಜ್ರಿವಾಲ್ ಅವರು ಸೇವಿಸುವ ಆಹಾರಕ್ಕೂ ಹೊಂದಿಕೆಯಾಗುತ್ತಿಲ್ಲ, ವೈದ್ಯರ ಡಯೇಟ್ ಸಾಕಷ್ಟು ನಿಯಂತ್ರಿತ ಮತ್ತು ಕಟ್ಟುನಿಟ್ಟಾಗಿದೆ ಅಲ್ಲಿ ಎಲ್ಲೂ ಸಿಹಿ ತಿನಿಸು ಸೇವಿಸಲು ಸೂಚಿಸಿಲ್ಲ ಆದರೆ ಅವರು ಸೇವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ಕೇಜ್ರಿವಾಲ್ ಪರ ವಾದಿಸಿದ ವಕೀಲ ಅಭಿಷೇಕ್ ಮನುಸಿಂಘ್ವಿ, ಕೇಜ್ರಿವಾಲ್ ಮಧುಮೇಹದಿಂದ ಬಳಲುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 12 ವರ್ಷಗಳಿಂದ ಅವರು ಪ್ರತಿದಿನ ಇನ್ಸುಲಿನ್ ಪಡೆಯುತ್ತಿದ್ದಾರೆ. ಅವರಿಗೆ ಪ್ರತಿದಿನ ಇನ್ಸುಲಿನ್ ನೀಡಲಾಗುತ್ತಿದೆ. ಜೈಲಿನಲ್ಲಿ ಇನ್ಸುಲಿನ್ ಪಡೆಯಲು ಸಾಧ್ಯವಾಗುತ್ತಿಲ್ಲ, ಹೀಗಾಗೀ ಅವರಿಗೆ ವೈದ್ಯರ ನೆರವು ಪಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ವಿಚಾರಣೆಯಲ್ಲಿ ಭಾಗಿಯಾದ ತಿಹಾರ್ ಜೈಲು ಅಧಿಕಾರಿಗಳ ಪರವಾಗಿ ವಕೀಲ ಯೋಗಿಂದರ್ ಹಾಂಡೂ ಹಾಜರಾಗಿ ಅವರು ಸರಿಯಾದ ಆಹಾರ ಕ್ರಮವನ್ನು ಅನುಸರಿಸುತ್ತಿಲ್ಲ, ನಾವು AIIMS ನಿಂದ ಅಭಿಪ್ರಾಯವನ್ನು ಪಡೆದುಕೊಂಡಿದ್ದೇವೆ. ಅವರು ಮಾವಿನಹಣ್ಣುಗಳನ್ನು ತಪ್ಪಿಸಬೇಕು, ಅವರು ಹೆಚ್ಚು ಇನ್ಸುಲಿನ್ ತೆಗೆದುಕೊಂಡರೆ, ಸಕ್ಕರೆಯ ಮಟ್ಟವು ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ವಾದಿಸಿದರು.

Previous Post
ಬಿಜೆಪಿ ಸೋಲಿಸಲು ಬಯಸಿದರೆ ಕಾಂಗ್ರೆಸ್ ಮತ್ತು ಸಿಪಿಐಗೆ ಮತ ನೀಡಬೇಡಿ – ಮಮತಾ ಬ್ಯಾನರ್ಜಿ
Next Post
ಮೊದಲ ಹಂತದ ಮತದಾನ, ಕೆಲವೆಡೆ ಹಿಂಸಚಾರ

Recent News