ಶ್ವೇತಪತ್ರ ಹೊರಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಶ್ವೇತಪತ್ರ ಹೊರಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

10 ವರ್ಷಗಳ ಯುಪಿಎ ಮತ್ತು 10 ವರ್ಷಗಳ ಎನ್‌ಡಿಎ

2014 ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿತ್ತು

ಒಂದು ದಶಕದ ತಪ್ಪು ನಿರ್ವಹಣೆಯ ಆರ್ಥಿಕತೆಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇವೆ

ಈಗ ಭಾರತ ‘ಟಾಪ್ ಫೈವ್’ ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ

ಪ್ರತಿ ವರ್ಷ ಜಾಗತಿಕ ಬೆಳವಣಿಗೆಗೆ ಮೂರನೇ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿದ್ದೇವೆ

ಯುಪಿಎ ಅವಧಿಯಲ್ಲಿ ಜಗತ್ತು ಭಾರತದ ಆರ್ಥಿಕ ಸಾಮರ್ಥ್ಯ ಮತ್ತು ಕ್ರಿಯಾಶೀಲತೆಯ ಮೇಲೆ ವಿಶ್ವಾಸ ಕಳೆದುಕೊಂಡಿತ್ತು

ಈಗಿನ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯ ನಿರೀಕ್ಷೆ ಹೊಂದಿದೆ

ಯುಪಿಎ ಆಡಳಿತ ಅವಧಿ ಹಗರಣಗಳಿಂದ ತುಂಬಿತ್ತು

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಹಗರಣ ಮಾಡಲಾಗಿತ್ತು

ನಾವು 2023 ರಲ್ಲಿ ಅತ್ಯಂತ ದೊಡ್ಡ ಮತ್ತು ವರ್ಷಾವಧಿಯ G20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ

ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರಗಳನ್ನು ಒದಗಿಸಿದೆ

ಲಾಜಿಸ್ಟಿಕ್ಸ್ ವಿಷಯದಲ್ಲಿ ಭಾರತವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ

ಯುಪಿಎ 2G ಹಗರಣವನ್ನು ನೋಡಿದ್ದೇವೆ; ನಾವು 4G ಅಡಿಯಲ್ಲಿ ಜನಸಂಖ್ಯೆಯ ವ್ಯಾಪಕ ವ್ಯಾಪ್ತಿಯನ್ನು ಹೊಂದಿದ್ದೇವೆ ಮತ್ತು 2023 ರಲ್ಲಿ ವಿಶ್ವದ ಅತ್ಯಂತ ವೇಗವಾಗಿ 5G ರೋಲ್‌ಔಟ್ ಅನ್ನು ಕಡಿಮೆ ದರಗಳೊಂದಿಗೆ ಹೊಂದಿದ್ದೇವೆ

ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಹಗರಣವಾಗಿದೆ

ಈಗ ಆರ್ಥಿಕತೆ ಮತ್ತು ಸಾರ್ವಜನಿಕ ಹಣಕಾಸುಗಳನ್ನು ಹೆಚ್ಚಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನಾವು ಪಾರದರ್ಶಕ ಮತ್ತು ವಸ್ತುನಿಷ್ಠ ಹರಾಜು ವ್ಯವಸ್ಥೆಯನ್ನು ರಚಿಸಿದ್ದೇವೆ

ಯುಪಿಎ ಅವಧಿಯಲ್ಲಿ, ಸರ್ಕಾರವು ಆಯ್ದ ಕೆಲವರಿಗೆ ಚಿನ್ನದ ಆಮದು ಪರವಾನಗಿಗಳನ್ನು ನೀಡಿತು

ಈಗ, ನಾವು ಗಿಫ್ಟ್ ಐಎಫ್‌ಎಸ್‌ಸಿಗೆ ಆಮದು ಮಾಡಿಕೊಳ್ಳಲು ಪಾರದರ್ಶಕ ಕಾರ್ಯವಿಧಾನದೊಂದಿಗೆ ವಿನಿಮಯವನ್ನು ಸ್ಥಾಪಿಸಿದ್ದೇವೆ

ಆಗ ನಮ್ಮ ಆರ್ಥಿಕತೆಯು ‘ಡ್ಯುಯಲ್ ಬ್ಯಾಲೆನ್ಸ್ ಶೀಟ್ ಸಮಸ್ಯೆಯನ್ನು’ ಎದುರಿಸುತ್ತಿತ್ತು

ನಮ್ಮ ಸರಕಾರದಲ್ಲಿ ಆರ್ಥಿಕತೆ ಮತ್ತು ಕಂಪನಿಗಳು ಹಾಗೂ ಬ್ಯಾಂಕಿಂಗ್ ವಲಯವನ್ನು ‘ಡ್ಯುಯಲ್ ಬ್ಯಾಲೆನ್ಸ್ ಶೀಟ್‌ನಿಂದ ಲಾಭ’ಕ್ಕೆ ತಿರುಗಿಸಿದ್ದೇವೆ. ಇದು ಹೂಡಿಕೆ ಮತ್ತು ಉದ್ಯೋಗವನ್ನು ಸೃಷ್ಟಿಸಲು ಗಣನೀಯ ಸಾಮರ್ಥ್ಯವನ್ನು ಹೊಂದಿದೆ.

ಯುಪಿಎ ಅವಧಿಯಲ್ಲಿ ದೇಶದಲ್ಲಿ ಹಣದುಬ್ಬರ ದರ ಎರಡಂಕಿಯಲ್ಲಿತ್ತು ಈಗ ಹಣದುಬ್ಬರವನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ

ಯುಪಿಎ ಅವಧಿಯಲ್ಲಿ ವಿದೇಶಿ ವಿನಿಮಯ ಬಿಕ್ಕಟ್ಟನ್ನು ಹೊಂದಿದ್ದೇವು. ಈಗ, ನಾವು US$620 ಶತಕೋಟಿಗಿಂತ ಹೆಚ್ಚಿನ ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದ್ದೇವೆ.

ಯುಪಿಎ ಅವಧಿಯಲ್ಲಿ ಮೂಲಸೌಕರ್ಯವು ಆದ್ಯತೆಯಾಗಿರಲಿಲ್ಲ;ಈಗ, ‘ಹೂಡಿಕೆ, ಬೆಳವಣಿಗೆ, ಉದ್ಯೋಗ, ಉದ್ಯಮಶೀಲತೆ, ಉಳಿತಾಯ ಮತ್ತು ಹೆಚ್ಚಿನ ಹೂಡಿಕೆ ಮಾಡಿ ವೇಗವಾಗಿ ಅಭಿವೃದ್ದಿ ಹೊಂದುತ್ತಿದ್ದೇವೆ

ಯುಪಿಎ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಡಿಮೆ ಕವರೇಜ್ ಹೊಂದಿದ್ದೇವು, ಈಗ ನಾವು ಸಾಮಾನ್ಯ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವ ಮೂಲಕ ಸಬಲರಾಗಿದ್ದೇವೆ

ನಮ್ಮ ಸರ್ಕಾರದ ಹತ್ತು ವರ್ಷಗಳಲ್ಲಿ ಸಾಧಿಸಿದ ಪ್ರಗತಿಯು ಯುಪಿಎ ಸರ್ಕಾರದ ಕಳೆದ ಹತ್ತು ವರ್ಷಗಳ ಆರ್ಥಿಕ ದುರುಪಯೋಗದಿಂದ ಉಂಟಾದ ಅವ್ಯವಸ್ಥೆಯನ್ನು ಸರಿದೂಗಿಸಿದೆ.

2024 ರಲ್ಲಿ ವಿಶ್ವಾಸ ಮತ್ತು ಉದ್ದೇಶವು 2014 ರ ಅಪನಂಬಿಕೆ ಮತ್ತು ಋಣಾತ್ಮಕತೆಯನ್ನು ಬದಲಿಸಿದೆ

Previous Post
ದೆಹಲಿಯಲ್ಲಿ ಫೆ.10 ರಿಂದ ವಿಶ್ವ ಪುಸ್ತಕ ಮೇಳ ನ್ಯಾಷನಲ್ ಬುಕ್ ಟ್ರಸ್ಟ್ ವತಿಯಿಂದ ಆಯೋಜನೆ
Next Post
ಸಂಸದೆ ಸುಮಲತಾ ರವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಿದರು.

Recent News