9ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ನಿತೀಶ್ ಕುಮಾರ್
ಆರ್ಜೆಡಿ-ಜೆಡಿ(ಯು) ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ 9ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಭಾರತ ಮಾತಾ ಕಿ ಜೈ ಮತ್ತು ಜೈ ಶ್ರೀ ರಾಮ್ ಘೋಷಣೆಗಳ ನಡುವೆ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಜಿತನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ಸಾಮ್ರಾಟ್ ಚೌಧರಿ, ಜೆಪಿ ನಡ್ಡಾ ಉಪಸ್ಥಿತರಿದ್ದರು. ನಿತೀಶ್ ಕುಮಾರ್ ಅವರು 2022 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಅವರು ಎನ್ಡಿಎ ಜೊತೆಗಿನ ಸಂಬಂಧವನ್ನು ಕಡಿದುಕೊಂಡು ಆರ್ಜೆಡಿ, ಕಾಂಗ್ರೆಸ್ ಮತ್ತು ಎಡ ಮೈತ್ರಿಕೂಟವನ್ನು ಸೇರಿಕೊಂಡರು ಮತ್ತು ಬಿಹಾರದ ಮಹಾಘಟಬಂಧನ್ನ ಮುಖ್ಯಮಂತ್ರಿಯಾಗಿದ್ದರು.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಇಂಡಿಯಾ ಒಕ್ಕೂಟವನ್ನು ತೊರೆದ ನಿತೀಶ್ ಕುಮಾರ್ ಎನ್ಡಿಎ ಸೇರಿಕೊಂಡಿದ್ದು. ಬಿಜೆಪಿ ಬೆಂಬಲದ ಮೂಲಕ ಬಿಹಾರದಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. ನಿತೀಶ್ ಕುಮಾರ್ ರಾಜಕೀಯ ಮೇಲಾಟ ನಿತೀಶ್ ಕುಮಾರ್ ಜೊತೆಗೆ ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಕೂಡ ಹೊಸ ಸರ್ಕಾರದ ಭಾಗವಾಗಲಿದೆ. ಹೆಚ್ಎಎಂ ಅಧ್ಯಕ್ಷ ಡಾ ಸಂತೋಷ್ ಕುಮಾರ್ ಸುಮನ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.
ಬಿಹಾರದಲ್ಲಿ ಬದಲಾದ ರಾಜಕೀಯ ಸಮೀಕರಣದಲ್ಲಿ ನಿತೀಶ್ ಕುಮಾರ್ ಇದೀಗ ಹೊಸ ಸಚಿವ ಸಂಪುಟವನ್ನು ಪಡೆಯಲಿರುವುದರಿಂದ ರಾತ್ರೋರಾತ್ರಿ ಆರ್ ಜೆಡಿ ಸಚಿವರು ಸಂಪುಟದಿಂದ ಹೊರಬಿದ್ದಿದ್ದಾರೆ. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ನಿತೀಶ್ ಕುಮಾರ್ ವಿರುದ್ಧ ಕಿಡಿ ಕಾರಿದ್ದು 2024 ಜೆಡಿಯು ಅಂತ್ಯವನ್ನು ಸೂಚಿಸುತ್ತದೆ ಮತ್ತು ಬಿಹಾರದಲ್ಲಿ ಆಟವು ಇನ್ನೂ ಮುಗಿದಿಲ್ಲ ಎಂದಿದ್ದಾರೆ. ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಬಿಜೆಪಿಯೊಂದಿಗಿನ ನಿತೀಶ್ ಅವರ ಪ್ರಯತ್ನವು ಅಲ್ಪಕಾಲಿಕವಾಗಿರುತ್ತದೆ ಮತ್ತು ಲೋಕಸಭೆ ಚುನಾವಣೆಯ ನಂತರ ಬಿಹಾರವು ಆರು ತಿಂಗಳೊಳಗೆ ಮತ್ತೆ ಬದಲಾವಣೆಗಳನ್ನು ಕಾಣಲಿದೆ. ಆದರೆ ನಿತೀಶ್ ಕುಮಾರ್ ಯಾರ ಜೊತೆ ಹೋದರೂ 2025ರ ರಾಜ್ಯ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ನಿತೀಶ್ ಕುಮಾರ್ ದ್ರೋಹದ ಹೊಸ ದಾಖಲೆಯನ್ನು ಮಾಡಿದ್ದಾರೆ ಮತ್ತು ಬಿಜೆಪಿ ಈಗ ದುರ್ಬಲವಾಗಿದೆ ಎಂದು ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸುತ್ತಿದ್ದಂತೆ, ಇಂಡಿಯಾ ಒಕ್ಕೂಟದಲ್ಲಿ ವಿಷಯಗಳು ಒಪ್ಪಿಗೆಯಾಗಿಲ್ಲ ಎಂದು ವಿವರಿಸಿದರು.