ಕಾಂಗ್ರೇಸ್ ಇಲ್ಲಿ ಸಾಯುತ್ತಿದೆ, ಪಾಕಿಸ್ತಾನ ಅಲ್ಲಿ ಅಳುತ್ತಿದೆ ಗುಜುರಾತ್ ನಲ್ಲಿ ಕೈ ವಿರುದ್ಧ ಮೋದಿ ವಾಗ್ದಾಳಿ

ಕಾಂಗ್ರೇಸ್ ಇಲ್ಲಿ ಸಾಯುತ್ತಿದೆ, ಪಾಕಿಸ್ತಾನ ಅಲ್ಲಿ ಅಳುತ್ತಿದೆ ಗುಜುರಾತ್ ನಲ್ಲಿ ಕೈ ವಿರುದ್ಧ ಮೋದಿ ವಾಗ್ದಾಳಿ

ಆನಂದ್ : ದೇಶದಲ್ಲಿ ಕಾಂಗ್ರೇಸ್ ಅನ್ನು ಭೂತಗನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ, ಆ ಪಕ್ಷ ಇಲ್ಲಿ ಸಾಯುತ್ತಿದ್ದರೆ ಅಲ್ಲಿ ಪಾಕಿಸ್ತಾನ ಅಳುತ್ತಿದೆ, ಯುವರಾಜ (ರಾಹುಲ್ ಗಾಂಧಿ) ಪ್ರಧಾನ ಮಂತ್ರಿಯಾಗಲಿ ಎಂದು ಪ್ರಾರ್ಥಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೇಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಗುಜುರಾತ್‌ನ ಆನಂದ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಾಕಿಸ್ತಾನದ ಅನುಯಾಯಿ, ದುರ್ಬಲ ಸರ್ಕಾರ ಭಾರತದಲ್ಲಿ ಚುಕ್ಕಾಣಿ ಹಿಡಿಯಬೇಕೆಂದು ವಿಶ್ವದ ಕೆಲವು ಶಕ್ತಿಗಳು ಬಯಸುತ್ತವೆ ನಾವು ‘ಲವ್ ಜಿಹಾದ್’ ಮತ್ತು ‘ಲ್ಯಾಂಡ್ ಜಿಹಾದ್’ ಬಗ್ಗೆ ಕೇಳಿದ್ದೇವೆ ಆದರೆ ಇಂಡಿಯಾ ಮೈತ್ರಿಕೂಟದ ನಾಯಕರೊಬ್ಬರು ಈಗ ‘ವೋಟ್ ಜಿಹಾದ್’ಗೆ ಕರೆ ನೀಡಿದ್ದಾರೆ ಇದು ತೃಷ್ಠಿಕರಣ ರಾಜಕೀಯದ ಒಂದು ಭಾಗ ಎಂದು ಟೀಕಿಸಿದರು.

ಎಸ್ಸಿ, ಎಸ್ಟಿ ಮತ್ತು ಓಬಿಸಿ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲು ಸಂವಿಧಾನ ಬದಲಿಸಲು ಕಾಂಗ್ರೇಸ್ ಬಯಸಿದೆ ಎಂದು ಆರೋಪಿಸಿದ ಅವರು ಧಾರ್ಮಿಕತೆ ಆಧಾರದ ಮೇಲೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವುದಿಲ್ಲ, ಅದರ ಮಿತ್ರ ಪಕ್ಷಗಳ ಸರ್ಕಾರಗಳ ಮೂಲಕ ರಾಜ್ಯಗಳಲ್ಲಿ ಹಿಂಬಾಗಿಲ ಮೂಲಕ ಮೀಸಲಾತಿ ನೀಡುವುದಿಲ್ಲ ಎಂದು ಲಿಖಿತವಾಗಿ ನೀಡುವಂತೆ ನಾನು ಸವಾಲು ಹಾಕುತ್ತೇನೆ ಎಂದು ಹೇಳಿದರು.

ನಾನು ಹಲವು ವರ್ಷಗಳ ಕಾಲ ಗುಜರಾತ್‌ನಲ್ಲಿ ಕೆಲಸ ಮಾಡಿದ್ದೇನೆ, 2014 ರಲ್ಲಿ ನೀವು ನನ್ನನ್ನು ದೇಶ ಸೇವೆ ಮಾಡಲು ಕಳುಹಿಸಿದ್ದೀರಿ, ಗುಜರಾತ್‌ನಲ್ಲಿ ಕೆಲಸ ಮಾಡುವಾಗ, ಗುಜರಾತ್‌ನ ಅಭಿವೃದ್ಧಿ ಭಾರತದ ಅಭಿವೃದ್ಧಿ ಎಂಬ ಮಂತ್ರವನ್ನು ಹೊಂದಿದ್ದೆವು, ನನಗೆ ಒಂದೇ ಒಂದು ಕನಸು ಇದೆ. 2047 ರಲ್ಲಿ ನಾವು 100 ವರ್ಷಗಳ ಸ್ವಾತಂತ್ಯ ದಿನಾಚರಣೆ ಪೂರೈಸಿದಾಗ ಭಾರತವು ‘ವಿಕ್ಷಿತ್ ಭಾರತ್’ ಆಗಬೇಕು” ಎಂದು ಪ್ರಧಾನಿ ಹೇಳಿದರು. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾನು 24×7 ಕೆಲಸ ಮಾಡುತ್ತೇನೆ ಇದು ನನ್ನ ಭರವಸೆ ಎಂದರು.

Previous Post
ಜಾಮೀನು ಕೋರಿ ಮನೀಶ್ ಸಿಸೋಡಿಯಾ ಹೈಕೋರ್ಟ್ ಮೊರೆ
Next Post
ರಾಜತಾಂತ್ರಿಕ ಪಾಸ್‌ಪೊರ್ಟ್ ರದ್ದಿಗೆ ಕೋರ್ಟ್ ಆದೇಶ ಅಗತ್ಯ

Recent News