ಕೋಟೆಯಲ್ಲಿರುವ ಚಕ್ರವರ್ತಿಗೆ ಜನರ ಕಷ್ಟಗಳು ಗೊತ್ತಿಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕ ಟೀಕೆ

ಕೋಟೆಯಲ್ಲಿರುವ ಚಕ್ರವರ್ತಿಗೆ ಜನರ ಕಷ್ಟಗಳು ಗೊತ್ತಿಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕ ಟೀಕೆ

ಅಹ್ಮದಬಾದ್ : ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಅವರನ್ನ ಕಾಂಗ್ರೇಸ್ ರಾಜಕುಮಾರ ಎಂದು ವ್ಯಂಗ್ಯ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಿಯಾಂಕ್ ಗಾಂಧಿ ಕೋಟೆಯಲ್ಲಿರುವ ಚಕ್ರವರ್ತಿ ( ನರೇಂದ್ರ ಮೋದಿ ) ಅವರಿಗೆ ಬಡವರ ಕಷ್ಟ ಅರ್ಥವಾಗುವುದಿಲ್ಲ ಎಂದು ಜರಿದಿದ್ದಾರೆ.

ಗುಜರಾತ್‌ನ ಬನಸ್ಕಾಂತದಲ್ಲಿ ನ್ಯಾಯ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ, ಅವರು (ಪಿಎಂ ಮೋದಿ) ನನ್ನ ಸಹೋದರನನ್ನು ‘ಶೆಹಜಾದಾ’ (ರಾಜಕುಮಾರ) ಎಂದು ಕರೆಯುತ್ತಾರೆ. ಆದರೆ ಈ ‘ರಾಜಕುಮಾರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,000 ಕಿಮೀ ದೂರವನ್ನು ನಡೆದಿದ್ದಾರೆ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅವರು ರೈತರಿಂದ ಕಾರ್ಮಿಕರವರೆಗೆ ಎಲ್ಲರಿಗೂ ತಮ್ಮ ಕಷ್ಟಗಳನ್ನು ಹೇಳಲು ಮತ್ತು ಅವುಗಳನ್ನು ಪರಿಹರಿಸಲು ನಾವು ಏನು ಮಾಡಬಹುದು ಎಂದು ತಿಳಿದುಕೊಂಡಿದ್ದಾರೆ.

ಮತ್ತೊಂದೆಡೆ, ನಿಮ್ಮ ‘ಶಹೆನ್‌ಶಾ ‘ (ಚಕ್ರವರ್ತಿ) ನರೇಂದ್ರ ಮೋದಿ ಅವರು ಕೋಟೆಗಳಲ್ಲಿ ವಾಸಿಸುತ್ತಿದ್ದಾರೆ. ನೀವು ಅವರನ್ನು ಟಿವಿಯಲ್ಲಿ ನೋಡಿದ್ದೀರಾ? ಅವರ ಮುಖವು ಸ್ವಚ್ಛವಾಗಿದೆ, ಅವರ ಬಿಳಿ ಕುರ್ತಾ ಯಾವಾಗಲೂ ಒಂದು ಸುಂಕು ಇಲ್ಲದೇ ನಿರ್ಮಲವಾಗಿರುತ್ತದೆ. ಅವರ ಕೂದಲು ಪರಿಪೂರ್ಣವಾಗಿದೆ. ಅವರು ನಿಮ್ಮ ಶ್ರಮವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ, ಪೆಟ್ರೋಲ್ ಮತ್ತು ಡೀಸೆಲ್ ಎಷ್ಟು ದುಬಾರಿಯಾಗಿದೆ, ಕೃಷಿ ಎಷ್ಟು ದುಬಾರಿಯಾಗಿದೆ ಎಂದು ಅವರು ಹೇಗೆ ಅರ್ಥಮಾಡಿಕೊಳ್ಳುತ್ತಾರೆ? ಎಂದು ತಿರುಗೇಟು ನೀಡಿದರು.

ಪ್ರತಿಯೊಂದು ವಸ್ತುವಿನ ಮೇಲೆ ಜಿಎಸ್‌ಟಿ ಹೇರಲಾಗಿದೆ, ಎಲ್ಲವೂ ದುಬಾರಿಯಾಗಿದೆ, ಇದೆಲ್ಲವೂ ಮೋದಿಜಿಗೆ ಅರ್ಥವಾಗುವುದಿಲ್ಲ, ಅವರು ತಮ್ಮ ಕೋಟೆಗೆ ಬೀಗ ಹಾಕಿದ್ದಾರೆ, ಅವರು ಅಧಿಕಾರದಿಂದ ಸುತ್ತುವರೆದಿದ್ದಾರೆ, ಎಲ್ಲರೂ ಅವರಿಗೆ ಹೆದರುತ್ತಾರೆ, ಯಾರೂ ಅವರಿಗೆ ಏನೂ ಹೇಳುವುದಿಲ್ಲ. ಒಂದು ವೇಳೆ ಯಾರಾದರೂ ಧ್ವನಿ ಎತ್ತಿದ್ದರೆ ಅದನ್ನು ಮೌನಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸುದರು.

Previous Post
ಬಿಜೆಪಿ ಸೇರ್ಪಡೆಯಾದ ಅರವಿಂದರ್ ಸಿಂಗ್ ಲವ್ಲಿ
Next Post
ಮಹಿಳೆ ಅಪಹರಣ ಕೇಸ್ ನಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಂಧನ

Recent News